ದೀಪ ಆರದಿರಲಿ

ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು
ನಷ್ಟವಾಗುತಾವೆ ಮನದಾಗೆ
ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ
ಇಳಿವಲ್ದು ಮಳೆಯಾಗಿ ನೆಲದಾಗೆ

ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ
ಕರೆಯೋದು ಒಂದೇ ಕೊನೆಯಾಸೆ
ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು
ಕೊರಗೋದು ತಪ್ಪಿಲ್ಲ ಅಳಿಯಾಸೆ

ಅಂದುಕೊಂಡದ್ದಲ್ಲ ಅವಲಕ್ಷಣಾದೀತು
ಆಶೆ ಮಾಡಿದ್ದು ಹುಸಿಯಾತು
ಮಾಡಿದ್ದು ಮುಟ್ಟಿದ್ದು ಎಡವಟ್ಟೆ ಆದೀತು
ಕನಸಿನ ಮಂಟಪ ಕುಸಿದಿತ್ತು

ಆಶೆಯ ಉಸುಗೀನ ಗೂಡನ್ನು ಕಟ್ಟೋದು
ಅಲೆ ಬಂದು ಅದನಾ ಕೆಡಿಸೋದು
ಬಣ್ಣದ ಕನಸಿನ ಕಾಮನ ಬಿಲ್ಲಾಗಿ
ಅಗೋ ಅನ್ನದ್ರಾಗ ಅಳಿಸೋದು

ಕನಸಿನ ಗೋಪುರ ಕಟ್ಟೋದು ಬೀಳೋದು
ನಡೆದಾದ ಬದುಕಿನ ಈ ಯಾತ್ರೆ
ಆಶೆಯ ದೀಪವು ಆರುತ್ತ ಹ್ಯಾಂಗ್ಯಾಂಗೊ
ಉಳದೈತೆ ಅದಕೇ ಹೂಪತ್ರೆ

ಏನೆಲ್ಲ ಹಾಳಾಗ್ಲಿ ಎಲ್ಲಾನು ಅಳಿದೋಗ್ಲಿ
ಆ ದೀಪ ಆರದಾಂಗೆ ಉಳಿದಿರ್ಲಿ
ಆ ಕಣ್ಣ ಬೆಳಕಿನ ದಾರೀನ ಹಿಡಕೊಂಡು
ಉಸಿರಾಟದೀ ಗೊಂಬೆ ಉಸಿರಾಡ್ಲಿ

ಕನಸಿನ ಏಣಿಗೆ ಸಾವಿರಾರು ಹಲ್ಲುಗಳು
ಹಲ್ಳುಗಳುದುರಿದ್ರೂ ಉಳದೈತೆ
ಆಶೆಯ ದೀಪಕ್ಕೆ ಬಿರುಗಾಳಿ ಬೀಸಿದ್ರು
ಆರಿ ಆರಿ ದೀಪ ಬದುಕೈತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿಯ
Next post ನಮ್ಮ ಕೇರಿಯ ಸುಬ್ಬ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys